Sunday, July 8, 2018

ಬೇಕಾದವರು

ಕವಿತೆಯನು ಪರಿಕಿಸುವ
ಮೃದು ಹೃದಯವು ಬೇಕು

ಕವಿಯ ಮನಸನು ಅಗೆವ
ಸಾಧಕರು ಇರಬೇಕು

ತಿದ್ದಿ ತೀಡಲು ಒಬ್ಬ
ಕಟುವಿಮರ್ಶಕ ಬೇಕು

ಕಾವ್ಯ ಗಂಧವನರಿತ
ಸುಮನಸರು  ಇರಬೇಕು

ಕವನ ತಥ್ಯವನಳೆಯೆ
ಚಿಂತಕನೂ ಬೇಕು

ಅಂತರಂಗವನರಿವ
ಸಹನಶೀಲರು ಬೇಕು

ಕಿಂಚಿತ್ತು ಬಿನದವಿರೆ
ನಸುನಗುವರಿರಬೇಕು

ಇನಿತು ವಿಷಾದಕ್ಕೆ
ಮನಮಿಡಿವರಿರಬೇಕು

ಗಹನ ಚಿತ್ತದ ಒಸರ
ಹೀರುವರು ಇರಬೇಕು

ಕವಿಯ  ಮನಸಿನ ಗುರಿಯ
ಹಂಬಲಿಸುವರು  ಬೇಕು


No comments: