Saturday, July 28, 2018

ಶೋಧ

ಮುಗಿಲ ಮೇಲೆ ಮೋಡ ನಿಂತು
ಮಳೆಯ ನೀರು ಸುರಿಸದಿರಲು
ಹಸಿರು ತನಗೆ ಕೇಳುತಿಹುದು
ವರ್ಷಧಾರೆಗರೆಯಲು

ಸುತ್ತಲೆಲ್ಲ ಧಗೆಯು ಹರಡಿ
ತಾನು ಅದರ ಬಿಸಿಗೆ ಬೆಂದು
ಬಹುಳ ತಾಪದಿಂದ ನೊಂದು
ಅರಸುತಿಹುದು ತಂಪನು

ಬಹಳ ಕಾಲ ಸುಪ್ತವಿದ್ದ
ನೋವ ಗ್ರಹಿಕೆಯಳಿದು ಹೋದ
ಆಳವಾದ ಮನದ ಗಾಯ-
ಕೆಲ್ಲಿ ಮದ್ದು ಸಿಗುವುದು

ಅಂದು ಕಂಡ ಇನಿತು ಪ್ರೀತಿ
ಇಂದು ಇಲ್ಲಿ ಕಾಣದಿರಲು
ಮತ್ತೆ ಮನಸು ಹುಡುಕುತಿಹುದು
ಒಂದು ಒಲುಮೆಯೊಸರನು


No comments: