Tuesday, July 3, 2018

ಕವಿತೆಯ ಉಗಮ

ಭಾವಲಹರಿಯು ತನ್ನ ಗುರಿಯೆಡೆಗೆ
ಪಯಣಿಸಲು, ತೊಡರುಗಳು ಒದಗಿದರೆ, ಉಗಮವೀ ಕವಿತೆ

ಮನೆಯ ಬೇಕನು ತಣಿಸಿ ಉಳಿದ ಕ್ಷೀರದ
ಮೊಸರ, ಮಂಥನದಿ ಪಡೆಯುವಾ ಬೆಣ್ಣೆಯಂತೆ

ಗಮ್ಯ ತಾಣದ ಕುರಿತು ಒಯ್ಯುವಾ
ರಥ ಮುರಿದು, ಬಿದ್ದ ಕಾಲದಿ ಬಂದ ವಿಮಾನದಂತೆ

ಕಾಲಮೋಡವು ತನ್ನ ದಾರಿಯಲಿ
ಬೆಟ್ಟವಿರೆ, ಅಳಿದು ಇಳೆಗೊರಗುವಾ ಸೋನೆಮಳೆಯಂತೆ

ನಿತ್ಯ ಹೂಡುವ ವೇಷ ಜನರ
ರಂಜಿಸದಿರಲು, ಮಾಂತ್ರಿಕನು ಹೊಸರೂಪ-ವನು ಧರಿಸುವಂತೆ

ಭಾವನಲಹರಿಯು ತನ್ನ ಪ್ರಕಟಣೆಗೆ
ಹವಣಿಸಲು, ಅಡ್ಡಿಗಳು ಬಂದಾಗ, ಉದಯವೀ ಕವಿತೆ   

No comments: